ಆಗಿದ್ದಿದ್ದರೆ........
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬೇಂದ್ರೆಯ ಗುರುಕುಲದ ಗರಡಿ ಮನೆಯಲ್ಲಿ ಬೆವರು ಸುರಿಸಿದ್ದಿದ್ದರೆ ವೇದಾಂತಿ ಕವಿಯಾಗುತ್ತಿದ್ದೆ
ಕಾರಂತರಂತಹ ವಿಶಾಲ ಕಡಲಿನ ತೀರದಲ್ಲಿ ಅವರ ಧೀಮಂತತೆಯ ಅಲೆಗಳು ರಪ್ಪನೆ ಬಡಿದಿದ್ದರೆ
ಕಾರ್ನಾಡ, ಕಂಬಾರರ ಒಡನಾಡಿ ರಂಗದ ಮೇಲೆ ಕುಣಿದಿದ್ದರೆ, ಸಾಹಸಿ ಸಾಹಿತಿಯೇ ಆಗುತ್ತಿದೆ ಖರೆ
ಬೇಡನಾಗಿ ಕಾಡಿನಲ್ಲಿ ಹುಟ್ಟಿದ್ದರೂ, ತಪಸ್ಸಿನ ಫಲದಿಂದ ಹುತ್ತದಿಂದ ಮತ್ತೆ ಹುಟ್ಟಿಬಂದು ಕವಿಯಾಗುತ್ತಿದ್ದೆ
ಖಯಾಲಿ ಋಷಿಯೊಬ್ಬ ಅಪ್ಪನಾಗಿ, ಮೀನುಗಾರ್ತಿ ಸುಂದರಿ ಅಮ್ಮನಾಗಿದ್ದಿದ್ದರೆ ವೇದ ವ್ಯಾಸನ ಮೀರುತ್ತಿದ್ದೆ
No comments:
Post a Comment