Tuesday, May 29, 2012

ಏಕಮೇವ ಕಥೆಗಾರ


ಏಕಮೇವ ಕಥೆಗಾರ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ದೋಣಿಯೇ ಮಂಚ; ಬೆಸ್ತರಬಲೆಯ ಮೇಲೆ ಕಾಮ ಕುಸ್ತಿ 
ಕ್ಷಣವೂ ಕಾಯಲು ಸಂಯಮವಿಲ್ಲದಂತೆ ಅತಿ ಕಾಮಾವಸ್ಥೆ

ಕಾಮಾತುರನು ಕುಮಾರಿಯ ಮಾತೆಯಾಗಿಸಿದಂತಹ ಅವಸ್ಥೆ
ಕುಮಾರನಿವ ಹುಟ್ಟಿದಾಗಲೇ ಮಹಾಜ್ಞಾನಿ ವ್ಯಾಸನಿವನಷ್ಟೇ

ಉಂಡನೋ, ಮಿಂದನೋ, ಗುಟುಕು ನೀರು ಕುಡಿದಿರಬೇಕಷ್ಟೇ
ಚಂಡಿಯ, ಅವಳ ಗಂಡನ ಕಥೆಯಿಂದ ಓ ನಮಃ ಅಂದನಷ್ಟೇ

ಸಾವಿರಾರು ಮಹಾ ಪಾತ್ರಗಳ ಹೆಣೆದು ಕಥೆಯ ಬೆಳೆಸಿದಾತ
ಕಾವಿ ಮಾತ್ರವೇ ಧರಿಸಿದರೂ, ಕಾಮದ ಸಿಹಿಯನ್ನು ಬೆರೆಸಿಬಿಟ್ಟ

ಘಾಸಿ ಅತಿಯಾದ ಋಷಿಗಳಿಂದ ರಾಜವಂಶವನು ಉಳಿಸಿಕೊಟ್ಟ
ದಾಸಿಯರಿಗೆ ತಾಪಸಿಯಿಂದ ನಿಧಾನಿ ವಿದುರ ಜ್ಞಾನಿಯ ಹುಟ್ಟಿಸಿಟ್ಟ

ಪಾಂಡುವಾದರೇನು ಕುಂತಿಗಿಲ್ಲವೇ ವರ ಋಷಿಗಳ ಮಂತ್ರದ ತಂತ್ರ?
ಅಂಡವು ಬ್ರಹ್ಮಾಂಡ ಸಮದ ಗಾಂಧಾರಿಯವಳು ಕುರುಡನ ಹೆಂಡತಿ!

ರಾಜಧಾನಿಯಿಂದ ಬೆಳೆಯಿತು ಕಥೆಯು ಕಾಡಿಗೆ; ವೇಷ ಮರೆಸುವ ಗತಿ
ಲಜ್ಜೆಯಿಂದ ನಡೆದರೂ ಪಾಂಚಾಲಿಯ ಗೆಜ್ಜೆ ನಿನಾದ ಕರೆದಿತ್ತು ಕೈಯೆತ್ತಿ

ನೀಚ ಕೀಚಕನ ತೊಡೆಯ ಹೊಡೆದೆಬ್ಬಿಸಿತ್ತು; ಮಲ್ಲ ಗಂಡನ ಕೆರಳಿಸಿತ್ತು
ಹುಚ್ಚೆಬ್ಬಿಸಿತ್ತು ದುರ್ಯೋಧನನ ತೊಡೆಗೆ; ಭೀಮನ ಗಧೆಯ ಪೆಟ್ಟಿಗೆ ಬಿದ್ದಿತ್ತು

ಹದಿನೆಂಟು ಇವನಿಗೆ ಮಹಾಪ್ರಾಣ; ಹದಿನೆಂಟರ ಭಗವದ್ಗೀತೆಯು ಹಾಡಿತ್ತು
ಎದಿರು ಯುಧ್ಧ ಕಾದಿದ್ದರೂ, ಕಾದುವ ಮುಂಚೆ ಕೃಷ್ಣನ ಹೆಸರಿನಲ್ಲಿ ಅಧ್ಯಾತ್ಮವಿತ್ತು

ಬೆಲ್ಲಕ್ಕೆ ಹೊಲಸು ಬೆರೆಸಿ, ಛಲಕ್ಕೆ ಒಲವು ಸೇರಿಸಿ, ನವರಸ ಮಸಾಲೆ ಔತಣವಿತ್ತ
ಮಲ್ಲರನು ಮಲ್ಲರೊಡನೆ ಸೆಣೆಸಿ, ಬಾಣದಿಂದ ಬಾಣವನ್ನು ಕತ್ತರಿಸಿ ರಣವ ನಡೆಸಿದ್ದ

ಎಷ್ಟೋ ಅಕ್ಶೋಹಣಿ ಯೋಧರನು ಯುಧ್ಧದಲಿ ರಕ್ತವನು ಕಾರಿಸಿ ನೆಲಕ್ಕೆ ಉರುಳಿಸಿದ್ದ 
ಕಷ್ಟ ಕಾರ್ಪಣ್ಯದಲಿ ನಿನ್ನೆ, ಮೊನ್ನೆಯೋ ವಧುವಾದ ಯುವತಿಯರ ವಿಧವೆಯರನಾಗಿಸಿದ್ದ

ಕವಿವರನ ತಲೆಯಲ್ಲಿ ಕುಣಿದ, ಕೆರಳಿದ, ಮೆರೆದ, ಕಣ್ಣೀರಿಟ್ಟ ಕ್ಷಣಗಳು ಎಣಿಸಲಾಗದಷ್ಟು
ಕವಿವಾಣಿಗೆ ಸಕಲ ರೀತಿಯಲಿ ಅನುಕಂಪಿಸಿದರು ಮತ್ತೆ ಮತ್ತೆ ರಸಿಕರು ಸಾವಿರ ಕೋಟಿಯಷ್ಟು

ಮನೆ, ಮಠ, ಗೋತ್ರ, ವಂಶ ಹಾಳ ನೀನೋ


ಮನೆ, ಮಠ, ಗೋತ್ರ, ವಂಶ ಹಾಳ ನೀನೋ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ತಾಯಿ, ತಂದೆ, ತಾತ, ಅಜ್ಜಿ, ಮುತ್ತಜ್ಜರು ಕುಡಿಯುತ್ತಾ ತೀರ್ಥವನು
ಬಾಯಿ ತುಂಬಾ ನೆನೆಸಿಕೊಂಡರು  ಗುರುಗಳನು, ಹರಿ, ಹರಾದಿಗಳನು

ನೀನೇಕೋ ಗಟ, ಗಟಾಂತ, ಬೀರು, ವೈನು ಗುಂಡು ಬಹುವಿಧಗಳನು  
ಏನೇನೂ ಪಾಪ ಕರ್ಮಗಳನು ಗೈಯದಿದ್ದರೂ ಅವರಾತ್ಮಕ್ಕೆ ಶಾಂತಿಯನು

ಕರುಣಿಸುವ ಧರಣ ಬೇಡವೇನೋ ಮನೆ, ಮಠ, ವಂಶ, ಗೋತ್ರಗಳೆಲ್ಲವನೂ
ಬೆರಣಿ ತಟ್ಟಿದಂತೆ ಅವರ ಕೀರ್ತಿಗೆ ಪೂರ್ತಿ ಕಳಂಕವನು ತಂದವನೋ ನೀನು

ಮೂರ್ತಿಯ ಸಂಧಿಗ್ದ


ಮೂರ್ತಿಯ ಸಂಧಿಗ್ದ

ಕಲ್ಲಿನಲ್ಲಿ ಹಾಲು ಜೇನನು ಹಿಂಡುವ ಬಾಲಿಶ ಚಟ
ಇಲಿಗೆ ಹುಲಿಯ ವೇಷವನ್ನು ತೊಡಿಸುವೆನೆಂಬ ಹಠ
ಎಲ್ಲೆಯಿಲ್ಲದೆ ಇಲ್ಲದರಲ್ಲಿ ಎಲ್ಲವನ್ನೂ ಹುಟ್ಟಿಸುವ ಆಟ

ಕಲ್ಲು ಮಂಡೆಗೆ ಇನಿತಾದರೂ ತಿಳಿಯ ಹೇಳಬಹುದೋ
ಗೇಲಿ ಮಾಡಿ, ಕೊನೆಗೆ ತಲೆಗೆ ವಿವೇಕವ ತುಂಬಲಹುದೋ
ಬಲ್ಲಿದರು ನೀವಾದರೆ ಮಾಡುವಿರೇನು ಹೇಳಬಹುದೋ? 

ನಾನೊಬ್ಬನೇ ಮಹಾ ವ್ಯಾಸ


ನಾನೊಬ್ಬನೇ ಮಹಾ ವ್ಯಾಸ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಭಿಮನ್ಯುವೂ ನಾನೇ, ಕಥೆಯ ಹೇಳಿದ ಕಿಲಾಡಿ ಕೃಷ್ಣನೂ 
ವ್ಯಭಿಚಾರಿ ದ್ರೌಪದಿಯೂ, ಸುಂದರಿಯ ಕಾಮಿಸಿದವನೂ 

ಜರೆಯುತ ಕೃಷ್ಣನನು ಓಲಗದಿ ಮೆರೆದ ಸುಯೋಧನನೂ
ಜರಾಸಂಧನನು ಸೀಳಿ ದಿಕ್ಕುಗಳಿಗೆಸೆದ ಬಲ ಭೀಮನೂ

ಉತ್ತರೆಗೆ ಹೆಣ್ಣು ವೇಷದಿ ಕುಣಿತವ ಕಲಿಸಿದ ಅರ್ಜುನನೂ
ಬತ್ತಳಿಕೆ, ಬಿಲ್ಲು ಬಾಣಗಳ ಬನ್ನೀ ಮರದ ಮೇಲೆ ಇಟ್ಟವನೂ

ಸುಂದರಿಯ ಸೀರೆಯ ಎಳೆಯುತ ಅಟ್ಟಹಾಸದಿ ನಕ್ಕವನೂ
ಮಂದ ಗಮನೆಯ ಮಾನವನು ಮಾಯದಲಿ ಉಳಿಸಿದವನೂ

ಮಹಾಭಾರತವೆಲ್ಲಾ ಹುಟ್ಟಿದುದು, ವಿಚಿತ್ರ ಪಾತ್ರಗಳ ಚಿತ್ರಣೆಯೂ
ಮೋಹ, ಮೋಸ, ಸಾಹಸ, ಸಕಲರ ಸಾವಿನಲಿ ಕೊನೆ ಗನಿಸಿದವನೂ

ನವಸರಂಗಳ ಕಾವ್ಯದ ಔತಣವ ನಿಮ್ಮಗೆಲ್ಲಾ ಬಡಿಸಿದವನೂ
ಸಾವಿರಾರು ಪಾತ್ರಗಳ ಕಲ್ಪಿಸಿದ ಓರ್ವನೇ ಮಹಾ ವ್ಯಾಸನೂ

ಅನೇಕ ಪಾತ್ರಧಾರಿ, ಏಕಮೇವ ಮಾಹಾ ಕವಿಯೂ, ಲೇಖಕನೂ
ಗಣೇಶನಿಗೆ ಲೇಖನಿಯ ಕೊಟ್ಟು ಬರೆಸಿದಂತೆ ನಿಜದಿ ಬರೆದವನೂ  

Sunday, May 13, 2012

Murthy's Words of Experience


Murthy's Words of Experience

Beauty is in the eye of the beholder; 
Beautiful lady is in the embracing arms of the bold holder; 
If the holder knows where exactly the beauty is in the cutie, he can hold it lightly or tightly; 
The pleasure tightens, tighter it gets.

ಮೂರ್ತಿಯ ಮತಿ ಮಂಥನದ ಮಧು


ಮೂರ್ತಿಯ ಮತಿ ಮಂಥನದ ಮಧು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅರವತ್ತ ನಾಲ್ಕಕ್ಕಿಂತ ಅರವತ್ತ ಐದು ಹೆಚ್ಚು; ಗಣಿತಕ್ಕಿಂತ ಗುಣ ಉತ್ತಮ

ಲೋಕ ವಿದ್ಯೆಗಳನ್ನೆಲ್ಲಾ ಕಲಿಯುವುದಕ್ಕಿಂತ, ಲೋಪವೇನೆನ್ನುವುದನ್ನು ಅರಿ

ಎಲ್ಲಾ ವಿದ್ಯೆಗಳನ್ನು ಕಲಿತರೆ ಒಳ್ಳಿತೇ; ಇಲ್ಲದ ವಿದ್ಯೆಗಳ ವಿಶ್ವಾಮಿತ್ರ ಸೃಷ್ಟಿಗೆ ಸಮವಿಲ್ಲ

ಏನೆಲ್ಲಾ ಗೊತ್ತು ಎಂಬುದು ಗೊತ್ತಿರ ಬೇಕು; ಏನು ಗೊತ್ತಿಲ್ಲವೆಂಬುದು ಮಾತ್ರ ಗೊತ್ತಿರಲೇ ಬೇಕು

ಕೇಳಿದ ಪ್ರಶ್ನೆಗಳಿಗೆಲ್ಲಾ  ಉತ್ತರಿಸುವ ಮಸ್ತಿಷ್ಕ ಉತ್ಕೃಷ್ಟ; ಕೇಳದ ಪ್ರಶ್ನೆಗಳನ್ನು ಮತಿಯಲ್ಲಿ ಮಿಂಚಿಸಿ ಕೊಳ್ಳುವುದಕ್ಕಿಂತ ಮಿಂಚಿದುದಿಲ್ಲ

ಚೆನ್ನಾಗಿ ಕೈ ಬಿಡುವುದನ್ನು ಚೊಕ್ಕವಾಗಿ ಕಲಿ; ಚೆಂಡಿನ ಆಟಕ್ಕಿಂತ ಚೆನ್ನೆಯ ಮನವನ್ನು ಚಕ್ಕಂದದಲಿ ಕದಿಯುವುದರಲ್ಲಿ ಕಲಿಯಾಗು

Saturday, May 12, 2012

ಹಿರಿತನದ ತಾಯಿತನಕೆ ಸಾಷ್ಟಾಂಗ ನಮಸ್ಕಾರ


ಹಿರಿತನದ ತಾಯಿತನಕೆ ಸಾಷ್ಟಾಂಗ ನಮಸ್ಕಾರ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಿನಗಿಂದು ನಮಸ್ಕಾರ; ನಿನಗೆಂದೂ ನಮಸ್ಕಾರ, ಅಂಬೆ
ನಿನ್ನಿಂದ ಬಂದೆ; ನಿನ್ನಿಂದ ಉಂಡೆ; ನೀನೆಂದದೇ ಅಂದೆ

ಕಣ್ಣಲ್ಲಿ ಕಾಣುವ ಮುಂಚೆಯೇ ಎದೆಯಲ್ಲಿ ಮುದವ ಹೊತ್ತೆ
ಭ್ರೂಣವನು ಅಂದದಲಿ ಅಂಡದಲಿ ಪೋಷಿಸಿ ಆಶ್ರಯವಿತ್ತೆ 

ಹೊಟ್ಟೆಯಲಿ ಒಂಬತ್ತು ಮಾಸ ಹೊತ್ತು ಏದುಸುರು ಬಿಟ್ಟವಳು
ಹೆತ್ತಾಗ ಉಂಬು ಇತ್ತು, ಮುತ್ತು ಇಟ್ಟು, ಸೊಂಟದಲಿ ಹೊತ್ತವಳು

ಅಂಬೆಗಾಲಿಟ್ಟು ತುಂಟತನ ಮಾಡುವಾಗ, ಕಿಲಕಿಲ ನಕ್ಕಾಗಲೆಲ್ಲಾ
ತುಂಬು ಹೃದಯದಿ ಆನಂದವನು ಸೂಸಿದವಳು ದಿನ ರಾತ್ರಿಯೆಲ್ಲಾ

ಅದೆಷ್ಟು ಭರದಲಿ ಬೆಳೆದೆನೋ! ಬಲಿಷ್ಠ ದೇಹದಿ ಏನೆಲ್ಲಾ ಮಾಡಿದೆನೋ
ಅದಷ್ಟೂ ನಿನಗೆ ಪಾದಾರ್ಪಣೆ; ಮನದಲ್ಲಿಯೇ ಸಾಷ್ಟಾಂಗ ನಮಿಸುವೆನು

ತಾಯಿತನವ ಮೀರುವುದು ಇಳೆಯಲ್ಲೇ ಅಳೆದು ಜಾಲಾಡಿದರೂ ಸಿಗಬಹುದೇ!
ತಾಯಿತನದ ಒಲವಿನ ಸಾಲವದು ಎಷ್ಟು ಸವೆಸಿದರೂ ಉಳಿಯುವಂತಹದೇ

Friday, May 11, 2012

ಮೂರ್ತಿಯ ಬೆಸವಾದದ ತರ್ಕ


ಮೂರ್ತಿಯ ಬೆಸವಾದದ ತರ್ಕ

ಹಣ್ಣು ಸಿಹಿ, ಕಹಿ ಕಾಯಿ, ಹುಳಿ ಲೊಟ್ಟೆ, ನಾಲಗೆಯ ಹಿಂಡುವ ಕ್ಷಾರ
ತಿನ್ನು ಹದದಲ್ಲಿ ಬೆರೆಸಿ, ಕಲಸಿ, ಬೇರೆ, ಬೇರೆ, ಹೇಗೆ ಬೇಕಾದರೂ 

ಸತ್ಯವನು ನುಡಿ ಒಮ್ಮೊಮ್ಮೆ ಮಾತ್ರ, ವಾರಕೋ, ವರುಷಕೋ ಸಾಕು
ವ್ರತವನ್ನು ಮಾತ್ರ ಹಿಡಿದಿಯದೆಯೇ, ಮಿತಿಯಿರಲಿ ನಿಜಕೆ ಬಲು ಜೋಕೆ

ಹರಿಶ್ಚಂದ್ರನದು ಒಂದು ತರಹದ ಶಾಪ, ವಿಧಿ ಸುಡುಗಾಡು ಕಾಯುವುದು
ಸರಿ, ಸಮಗಳ ಅರಿಯದಾ ಮೂಢ, ಗೊಡ್ಡು ಸತ್ಯವಾಡಿದನವನು ಸತ್ಯವಾದಿ

ಸಿಹಿಯಾದರೂ ಒಮ್ಮೊಮ್ಮೆ, ಕಹಿಯಾದೀತು ಅದೇ ಸತ್ಯ ಮತ್ತೊಮ್ಮೆ ತಿಳಿ
ಕಹಿಗೆ ಸಿಹಿ ಬೆರೆಸಿ ಸುಳ್ಳಿನ ಲಾಡು ಉಂಡೆಗಳನು ಹಂಚಿದರೆ ತಪ್ಪೇನಿಲ್ಲ

ಕಳ್ಳನವ ಕಿಲಾಡಿ ಕಿಟ್ಟ, ಆಡಿಸಿದಾತ ದೊಡ್ಡಣ್ಣ ಬಾಯಲ್ಲಿ ಕೂಡ ಸುಳ್ಳು ಕಂತೆ
ಮಲ್ಲಯುಧ್ಧ, ಗಧೆಯಿಂದ ಹೊಡೆದಾಡುವಾಗಲೂ ಮೋಸವನು ಕಲಿಸಿದಾತ

ವನವಾಸದ ಅತಿ ಆಸೆಯಿದ್ದರೆ, ಸತಿಯ ಕಳೆದು ಅಳು ಅಪ್ಪನ ಮಾತು ಪಾಲಿಸಲು
ಬೆಸ ಕಾರಣಕೆ ಅಟ್ಟು ಸತಿ ಸೀತೆಯ ಮತ್ತೊಮ್ಮೆ ಕಾಡಿಗೆ ಅಗಸನೋರ್ವ ಬೊಗಳಲು

ವ್ಯಾಸ, ವಾಲ್ಮೀಕಿಯರ ಕತೆಗಳನು ವ್ಯಥಾ ತಥಾ ಅಳವಡಿಸದೆಯೇ ತಿಳುವಳಿಕೆಯಲಿ
ಬೆಸದ ಬತ್ತಳಿಕೆಯ ಬೆನ್ನ ಮೇಲೆ ಹೊತ್ತು, ಬಿಲ್ಲಿಗೆ ಸಮಯೋಚಿತ ಹೂಡು ಮರ್ಮದಲಿ

Thursday, May 10, 2012

ಮೂರ್ತಿಯ ಅನುಭವದ ಕಿವಿಮಾತು


ಮೂರ್ತಿಯ ಅನುಭವದ ಕಿವಿಗುಟ್ಟು

ಹುಟ್ಟಿನಿಂದ ಪೆಟ್ಟು ತಿಂದಷ್ಟೂ ನೆಟ್ಟಗಾದೀತು ನೆತ್ತಿ
ಬಿಟ್ಟಿ ಕೊಟ್ಟರೆ ತಟ್ಟದು, ಅಟ್ಟು, ಹಿಟ್ಟಿಗೆ ಬೆಲೆಯಿಲ್ಲ

ಕಟ್ಟು ನಿಟ್ಟು ಇದ್ದರೇನೇಯೇ ಗಟ್ಟಿ ರಟ್ಟೆ, ಸೊಂಟ, 
ಬೆಟ್ಟದಂತಹ ದೇಹ ನೆಲ ಮೆಟ್ಟಿ ಗತ್ತಿನಲ್ಲಿ ನಿಂತೀತು

ತಂಟೆ ಮಾಡದೆ ಮೈ ಮನ ಮುರಿದು ನೀಗಿದರೆ ಮಾತ್ರ
ಚಟ್ಟ ಹತ್ತಿ ಸುಮ್ಮನೆ ಮಲಗುವ ಮುನ್ನ ನಿನಗೆ ನೆಮ್ಮದಿ

Saturday, May 5, 2012

ಮಹಾ ಮಡಿ ತುರುಕರ ರುಚಿರುಚಿಯ ಊಟ


ಮಹಾ ಮಡಿ ತುರುಕರ ರುಚಿರುಚಿಯ ಊಟ
ಡಾಕ್ಟರ್ ಕೆ. ಆರ್. ಎಸ. ಮೂರ್ತಿ

ಒಂಟೆಯ ಹಾಲಿನ ಬಿಸಿ ಬಿಸಿ ಶ್ಯಾವಿಗೆ ಪಾಯಸವನು
ಗಟ ಗಟ ಕುಡಿದ ಹಸೀ ಸಾಬರ ಪುಟಾಣಿ ಬಾಲಕನು

ಬುರುಕದ ಒಳಗೆ ಬಚ್ಚಿದ ತುರುಕಿಯ ಸೌಂದರ್ಯ ಭದ್ರ ಕಣೆ
ಸೌಟಲಿ ತೊಳಸಿದಳು ಒಂಟೆಯ ಮಜ್ಜಿಗೆ ಹುಳಿಗೆ ಒಗ್ಗರಣೆ

ಭರ ಭರ ಭಾರದ ಹೆಜ್ಜೆಯ ಹಾಕಿ ಧಾವಿಸಿ ಬಂದನು ಮುಸಲ್ಮಾನ
ಕರಿದು ಆಯಿತೇ ಗರಿಗರಿಯ ಅಂಬೊಡೆ ತಟ್ಟೆ ತುಂಬಾ ತಿನ್ನೋಣ

ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ


ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ

ವಿಪ್ರ ಸ್ನೇಹಿತರಿಗೆ: (ನಾನು  "ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ" ಎಂಬ ಕವನವನ್ನು ಬರೆದದ್ದಕ್ಕೆ ಸಿಲಿಕಾನ್ ಕಣಿವೆಯ ವಿಪ್ರ ಮಹಾ ಸಭೆಯವರು ವಿವರಣೆಯನ್ನು, ಅಂತರಾರ್ಥವನ್ನು ಕೇಳಿದರು. ಅದಕ್ಕೆ ನನ್ನ ಉತ್ತರವಿದು)

ಕವನವು ಇಲ್ಲಿದೆ:
http://kannada.oneindia.in/nri/poem/

ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ

ಎಲ್ಲರಿಗೂ ಗೊತ್ತಿರುವಂತೆ, ಅನೇಕ ಬ್ರಾಹ್ಮಣರನ್ನು ಬಲವಂತವಾಗಿ ಮುಸಲ್ಮಾನರು ತಾವು ಆಳುವಾಗ ತಮ್ಮ ಮತಕ್ಕೆ ಪರಿವರ್ತಿಸಿದರು. ಮತವು ಬದಲಾದರೂ ಮತಿಯಲ್ಲಿನ ಮಠವು ಪೂರ್ತಿಯಾಗಿ ಬದಲಾಗದೆ ಇರಬಹುದು. ರಕ್ತಗತವಾದ ಜಠರದ ಗುಟ್ಟು ಹಾಗೆಯೇ ಉಳಿದು ಕೊಂಡಿದ್ದು, ಮತಾಂತರಿಸಿದರೂ ಮಜ್ಜಿಗೆ ಹುಳಿ, ಅಂಬೊಡೆ. ಪಾಯಸ ಇತ್ಯಾದಿ ಸಂಪ್ರದಾಯಗಳೂ ಭದ್ರವಾಗಿ ಉಳಿದುಕೊಂಡಿರಬಹುದು. ಸಸ್ಯಾಹಾರ ಆಹಾರ ವ್ರತವೂ ಭದ್ರವಾಗಿಯೇ ನೆಲಸಿರಬಹುದು.

ಗೃಹಿಣಿಯು ಬುರುಕವನ್ನು ಹಾಕಿಕೊಂಡಿದ್ದರೂ, ಅವಳ ಬ್ರಾಹ್ಮಣಿಕೆಯ ಸೌಂದರ್ಯವು ಭದ್ರ; ಬಾಲಕನಿಗೂ ಶ್ಯಾವಿಗೆ ಪಾಯಸದ ರುಚಿ ಅಚ್ಚುಮೆಚ್ಚು. ಗೃಹಸ್ಥನಿಗಂತೂ ಬ್ರಾಹ್ಮಣರ ಬಗ್ಗೆ ಅಕ್ಕರೆಯಿಂದ ನಾವು ನಮ್ಮನ್ನೇ ಛೇಡಿಸಿಕೊಳ್ಳುವ ಹಾಗೆ, ಹಸಿವೆಯನ್ನು ತಡೆದುಕೊಳ್ಳಲು ಆಗದಿರಬಹುದು. ಏಕೆಂದರೆ, ಅವನು ರಕ್ತಗತವಾಗಿ ಬ್ರಾಹ್ಮಣನೆ! ಆದ್ದರಿಂದ ಅವನು, ಹಸಿದ ಬ್ರಾಹ್ಮಣನಂತೆ ಭಾರದ ಹೆಜ್ಜೆಯನ್ನು ಭರ ಭರದಿ ಹಾಕಿಕೊಂಡು ಬಂದು ಮಜ್ಜಿಗೆ ಹುಳಿ, ಅಂಬೊಡೆಗಳಿಗೆ ಹಾತೊರೆಯುತ್ತಿದ್ದಾನೆ.

ನೀವೆಲ್ಲರೂ ನಿಮ್ಮ ಬ್ರಾಹ್ಮಣಿಕೆಯನ್ನು ಊಟದಲ್ಲಾದರೂ ಉಳಿಸಿಕೊಂಡಿರಬಹುದು. ನಿಮ್ಮ ನಾಲಿಗೆಗಳು ಮಾಂಸಾಹಾರಕ್ಕೆ ಬಲಿ ಬಿದ್ದಿಲ್ಲವೆಂದೂ, ನಿಮ್ಮ ತುಟಿಗಳಿಗೆ ಬೀಡಿ, ಸಿಗರೇಟು ಸೊಂಕಿಲ್ಲವೆಂದು, ನಿಮ್ಮ ಬೆಳ್ಳಿ ಬಟ್ಟಲಿಗೆ ಮಾದಕ ಪಾನೀಯಗಳು ಸುರಿದಿಲ್ಲವೆಂದೂ, ನೀವೆಲ್ಲರೂ ಅತೀವ್ರ ಭಕ್ತಿ ಪೂರ್ವಕವಾಗಿ ಗಣ ಹೋಮವನ್ನು ನಡೆಸಿದಾಗಿನ ಛಾಯಾಚಿತ್ರ ಹಾಗೂ ಚಲನ ಚಿತ್ರಗಳನ್ನು ನೋಡಿ, ಪ್ರಧಾನವಾಗಿ ವಿಪ್ರತೆಯ ಅಲಂಕಾರವಾದ ಯಜ್ಞೋಪವೀತಗಳನ್ನೂ ನೋಡಿ, ನಿಮ್ಮ ಹಣೆಯನ್ನು ಅಲಂಕರಿಸಿದ ವಿವಿಧ ಪವಿತ್ರ ಪೂರ್ಣ ನಾಮ, ಮುದ್ರೆ, ವಿಭೂತಿ, ಚಂದನ ಇತ್ಯಾದಿಗಳನ್ನೂ ನೋಡಿ ನಂಬಿದ್ದೇನೆ.

ಅಕಸ್ಮಾತ್ ಆಗಿಯೂ ನನ್ನ ಅನಿಸಿಕೆಗಳು, ನಿಮ್ಮೆಲ್ಲರ ಬಗ್ಗೆ ನನ್ನ ಅತೀವ್ರ ಗೌರವವು ಛಿದ್ರವಾಗದೆಯೇ ಇರಲೆಂದು ಆಶಿಸುತ್ತೇನೆ. ನನ್ನ ಅಭಿಪ್ರಾಯಗಳು ತಪ್ಪಿದ್ದಲ್ಲಿ ವಿಪ್ರೋತ್ತಮರಾದ ತಾವೆಲ್ಲಾ ಆಶೀರ್ವದಿಸಿ ಕ್ಷಮಿಸಿ

ಗೌರವಿತ ಪುರೋಹಿತರಾದ ಮಕೋಡು  ವೆಂಕಟೇಶ ಭಟ್ಟರು ನಿಮ್ಮ ವಿಪ್ರ ಸಂಪ್ರದಾಯವನ್ನು, ನಿಮ್ಮ ಮಕ್ಕಳ ಮಡಿ ವಿಪ್ರತೆಯನ್ನೂ ಉಳಿಸಿಕೊಡಲಿ ಎಂಬುದೇ ನನ್ನ ಆಶಯ.

ಮೂರ್ತಿ