Wednesday, August 8, 2012

ಆದರದ ಕರೆ, ಬಲು ದೂರದ ಕರೆ


ಆದರದ ಕರೆ, ಬಲು ದೂರದ ಕರೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಿಮ್ಮ ತಲೆ ಮೇಲೆ, 
ಬಲು ದೂರದಲಿ
ಎತ್ತಲೋ ಇರುವ ತಾರೆಯನು
ಸುತ್ತುತಿರುವ ಪೃಥ್ವಿಯಂತದೆಯೇ 
ಗುಂಡು ಗುಂಡಾಗಿ ಇದೆಯಂತೆ 
ಅಲ್ಲಿಂದ ಸಂಕೇತದಲಿ ಕರೆಯುತಿಹರು 
"ನಾವೂ, ನೀವೂ ಒಂದೇ ತರಹ"
"ನಾವೆಲ್ಲಾ ನಿಮ್ಮ ಗೊತ್ರದಲ್ಲಿಯೇ ಹುಟ್ಟಿ"
"ಸಂಕೆತಾಕ್ಷತೆ ಚುಮುಕಿಸುತಿಹೆವು"

"ಪನ್ನೀರ ದಾನಿ ಕಾದಿದೆ, ಗುಲಾಬಿ,
ಜಿಲೇಬಿ, ಲಾಡು, ಮೈಸೂರು ಪಾಕೂ
ನಿಮಗೆಂದೇ ಮಾಡಿಹೆವು"

"ಬರಬೇಕು, ಬರಲೇ ಬೇಕು ಬ್ರಾಹ್ಮಣರೆಲ್ಲಾ
ಸಂಸಾರ ಸಮೇತ, ಆತುರದಲಿ ಅತಿಥಿಗಳೆಲ್ಲ
ದಯ ಮಾಡಿಸ ಬೇಕು"

"ಗೊತ್ತಿರ ಬೇಕಲ್ಲವೇ ನಿಮಗೆಲ್ಲಾ
ನಾವು ಸಪ್ತರ್ಷಿ ಮಂಡಲದ ನಿಮ್ಮ ಪೂರ್ವಿಕರು"

ಮತ್ತೆ ಮತ್ತೆ ಹುಟ್ಟಿ ಬರುವ ನೀನೋ


ಮತ್ತೆ ಮತ್ತೆ ಹುಟ್ಟಿ ಬರುವ ನೀನೋ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಮುಗುಳು ನಗೆಯಲಿ, ಮುರಳೀಧರ ಬಾರೋ 
ಕಂಗಳಿಗೆ ಮಂಗಳ ಬೆಳಕಿನಾರತಿಯ ತಾರೋ

ಕಂದರೆಲ್ಲರೂ ಮನೋಹರ ಸುಂದರ ರೂಪ ತಾಳಿ
ಕಂಡವರ ಗುಂಡಿಗೆಯಲಿ ಬಿಂಬ ನಿನ್ನದೇ ಕಾಣಲಿ

ಹೊಟ್ಟೆಯಲಿ ನವಮಾಸ ಹೊತ್ತ ಎಲ್ಲಾ ದೇವಕಿಯರು
ಪುಟ್ಟ ಕೂಸನು ಸೊಂಟದಲಿ ಇಟ್ಟಾಗ ನೀನೇ ತೋರು

ನಿತ್ಯ ಅವತಾರನು ಸಂತರ ಮತಿಯಲಿ ಅಲ್ಲವೇನೋ?
ಮತ್ತೆ, ಮತ್ತೆ ಮನೆಮನೆಯಲೂ ಹುಟ್ಟಿ ಬರುವ ನೀನೋ

ನಮಗೇಕೆ ಬೇಕು ಚಿನ್ನ?

ನಮಗೇಕೆ ಬೇಕು ಚಿನ್ನ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಮೆರಿಕಾಗೆ ಹೋಗಲಿ, ಬ್ರಿಟಿಷರಿಗೆ ಕೊಡಲಿ
ಚೈನಾಗೆ ಎಲ್ಲರಿಗಿಂತಾ ಅತಿ ಹೆಚ್ಚು ಚಿನ್ನ

ನಮಗೆ ಸಾಕಷ್ಟು ಇದೆಯಲ್ಲಾ ತೆಂಗಿನ ಚಿಪ್ಪು
ನಮಗಿಂತಾ ಮೀರಿದವರು ಕೊಬ್ಬಿನಲಿ ಯಾರೂ

ಒಲಂಪಿಕ್ಸ್ ಪಂದ್ಯಗಳಲ್ಲಿ ಸರಿಯಾವುದೂ ಇಲ್ಲಪ್ಪ
ನಮಗೋಸ್ಕರವೇ ಬೇಕು ಇನ್ನೊಂದು ರೀತಿಯ ಪಂದ್ಯ  

ವೇದಾಂತದ ಹೆಸರಿನಲ್ಲಿ ಕಾಡು ಹರಟೆ; ಬೆಳಿಗ್ಗೆ, ರಾತ್ರಿ
ವೇದಾಂತ ಎಂದುಕೊಂಡು ಬರೀ ಬೊಕಳೆಯ ಟೊಳ್ಳು

ನಮ್ಮ ಪೋಲಿ ರಾಜಕೀಯರನು ಲಂಚದಲಿ ಮೀರಿಸುವರಿಲ್ಲ
ಜಾತಿ ಬೇಧಕ್ಕೆ, ಎಲ್ಲಾ ಜಾತಿಯವರ ದರಿದ್ರಕ್ಕೆ ಕಾರಣ ದಾರ

ಮಂತ್ರಿಯ ಕೆಲಸಕ್ಕೆ ನಮ್ಮ ಜಾತಿಯೇ ಆಗಬೇಕ್ಕು ಸ್ವಾಮಿ
ಬೇರೆಯವರು ಗೆದ್ದಾಗ ಅವರವರ ಜಾತಿಗೆ ಮಂತ್ರಿ ಆಸನ

ಲೂಟಿ ಮಾಡುವುದಕ್ಕೆ ಗಣಿಯ ಕನ್ನ ನಮ್ಮ ಅಮ್ಮನಿಗೆ ಹಾಕಿ
ಕೋಟಿ ಲೆಕ್ಕದಲಿ ನಮಗೆ, ನಮ್ಮ ಜಾತಿಯವರಿಗೆ ಹುಟ್ಟಿನ ಹಕ್ಕು 

ನಮ್ಮ ದೇಶದ ಎಲ್ಲಾ ಬಡತನಕ್ಕೆ ಲೋಕವನ್ನೇ ಬಯ್ಯುವ ಧಿಕ್ಕು; ಹೆಮ್ಮೆಗೇ ತ್ಯಾಗ
ಬಾರಿನ ತೀರ್ಥಕ್ಕೆ ಬಾಯಾರಿಕೆ; ಸೋಮಾರಿ ವೀರರು ನಾವು; ಯಾರಿಗೂ ಕಡಿಮೆಯಲ್ಲ

Tuesday, August 7, 2012

ನಾಲಿಗೆ ಮುಂದೋ? ತಲೆಯು ಮುಂದೋ?


ನಾಲಿಗೆ ಮುಂದೋ? ತಲೆಯು ಮುಂದೋ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಡೆ, ಈರುಳ್ಳಿ ದೋಸೆ, ಮಸಾಲೆ ದೋಸೆ
ರವೆ ದೋಸೆ, ಪೆಸರಟ್ಟು ನಿಧಾನದಿ ಬಂದುವೆ?

ರವೆ ಇಡ್ಲಿ, ಮಸಾಲೆ ಇಡ್ಲಿ, ಡೋಕಳಾ ಗಳು
ನುಚ್ಚಿನುಂಡೆ ನಾಲಿಗೆಗೆ ಬಿದ್ದ ಮೇಲೆ ಬಂದುವೋ?

ಸ್ವಲ್ಪ ಯೋಚನೆ ಮಾಡಿ; ಆಮೇಲೆ ನಾಲಿಗೆಗೆ ಸೇವೆ
ನಾಲಿಗೆ ಮುಂದು, ತಲೆಗೆ ಯಾಕೆ ರಜೆ ಕೊಡುತ್ತೀವಿ?

Saturday, August 4, 2012

ದಾಹವೊಂದಿದ್ದರೆ ಸಾಕು


ದಾಹವೊಂದಿದ್ದರೆ ಸಾಕು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ತುಂಬಿ, ತುಂಬಿ ಉಂಬುವ ದುಂಬಿಯು ಆನು
ಉಂಡು ಕಕ್ಕಿದ ಎಂಜಲು ಅತಿ ಮಧುರ ಜೇನು

ಅಂತರಾತ್ಮದಲಿದೆ ಹಸಿವು ಹಗಲೂ ಇರುಳೂ 
ಸಂತನಂತೂ ನಾನಲ್ಲ, ಚಿಂತನವಿಂತೂ ಬರದು

ದಾಹ ಮಾತ್ರ ಈ ದೇಹದಲಿ ಇಹಕ್ಕೆ ಬಂದಾಗಿತ್ತ್ತು
ಮಹಾ ಮಂತ್ರಗಳ ಅಂತರಾರ್ಥ ಅರಿವಾಗದ ಚಿತ್ತ 

ಭರ ಭರದಿ ಧುಮ್ಮಿಕ್ಕಿ ಸುರಿಯುತ್ತದೆ ಸುರ ಜೇನು 
ಹರ ಸಾರ ಧಾರಾಮೃತ ಉಣಿಸುವ ಕಾಮಧೇನು 

ಚಿತ್ತವ ಚಾಚುವ ಗೋಚಿಲ್ಲ, ಹುಚ್ಚು ಹಿಡಿದರೆ ಸಾಕು
ಮಿತದ ಮಾತೇಕೆ ಅಮೃತಕೆ ದಾಹವೊಂದಿರಬೇಕು 

ಮಡಿಯಲ್ಲಿ ಮ್ಯಾನುಫಾಕ್ಚರ್ರು!


ಮಡಿಯಲ್ಲಿ ಮ್ಯಾನುಫಾಕ್ಚರ್ರು!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಮಸ್ಕಾರ! ಏನು ಸ್ವಾಮಿ ಬ್ರಾಹ್ಮಣ ಕಳೆ ನಿಮ್ಮ ಮುಖದ ಮೇಲೆ ಪ್ರಜ್ವಲಿಸುತ್ತಾ ಇದೆ?
ಹೋಮ, ಸಹಸ್ರ ನಾಮ, ಅಭಿಷೇಕ, ನೈವೇದ್ಯ ಎಲ್ಲಾ ಈಗ ತಾನೇ ಮಾಡಿರುವ ಹಾಗಿದೆ? 

ಮರೆತೇ ಹೋಯ್ತು! ನಿಮ್ಮ ಉಪಾಕರ್ಮ ಚೆನ್ನಾಗಾಯ್ತೇನು? ಋಗ್ವೇದವೋ ಯಜುರ್ವೆದವೋ?
ಸರಿಗಮ ಕೂಡ ನಿಮ್ಮ ಬಾಯಿಂದ ಹೊರಡಲ್ಲ! ಅದಕ್ಕೆ ನಾನು ಕೇಳಲಿಲ್ಲ ಸಾಮವೇದವೋ?

ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಹ್ಯಾಗೂ ಯಾವ ವೇದಾನೂ ಬರಲ್ಲಾಂತ ನನಗೂ ಗೊತ್ತು
ಹೊಸ ಜನಿವಾರ ಹಾಕಿ ಕೊಂಡಿರಿ ತಾನೇ? ಮಡಿಯಲ್ಲಿ ಉಪಾಕರ್ಮ ಮಾಡಿದ್ರೀ ಅಂತ ಮಾತು 

ಉಪಾಕರ್ಮದ ಫೋಟೋನೂ, ವೀಡಿಯೋನೂ ಫೇಸ್ ಬುಕ್ಕಿನಲ್ಲಿ ನೋಡಿದೆ; ಚೆನ್ನಾಗಿ ಕಾಣ್ತೀರಿ
ಆಪೋಶನ ತೆಗೆದು ಕೊಳ್ಳುತ್ತಿರುವಾಗಲೂ ಕ್ಯಾಮರಾ ಕಡೆ ಫಿಲಂ ಸ್ಟಾರ್ ತರಹ ಪೋಸ್ ಕೊಟ್ರಿ

ಈ ವರ್ಷದ ಹೊಸತನ ಏನು ಗೊತ್ತಾ? ನಿಮ್ಮ ಯಜ್ಞೋಪವೀತ, ಎಲ್ಲಾ ಪೂಜಾ ಸಾಮಗ್ರಿನ
ಇಂಡಿಯಾಗೆಲ್ಲಾ ಉತ್ಪಾದನೆ ಮಾಡಿ, ರಫ್ತು ಮಾಡಿದ್ದು ಎಲ್ಲಿಂದಾಂತ ಗೊತ್ತಿರಬೇಕಲ್ಲಾ: ಚೈನಾ!

ಕಾಪಿ ಮಯಂ ಜಗತ್

ಕಾಪಿ ಮಯಂ ಜಗತ್
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬರೀ ಕಾಪಿ: ಕರೀ ಕಾಪಿ, ಬಿಳೀ ಕಾಪಿ, ಕಂದು ಕಾಪಿ, ಹಳದಿ ಬಣ್ಣದ ಕಾಪಿ
ಸರಿಯಾಗಿ ಕುಡಿಸ್ತಾರೆ, ಕದ್ದೂ, ಕದ್ದೂ ಕುಡಿಸ್ತಾರೆ. ಅವರಲ್ಲ ನೀವೇ ಪಾಪಿ

ಬರೆಯುವಾಗ ಕಾಪೀನೆ ಬರೆಯೋದು; ಜರೆಯೋಕ್ಕೆ ಮಾತ್ರ ಚೂರೂ ಮಿತಿಯಿಲ್ಲ
ಮಾರುವಾಗ ಕಾಪಿ ಮಾಡಿದ್ದೆಲ್ಲಾ ಆರ್ಕಿಮಿಡೀಸನ್ನು ಕಾಪಿ ಮಾಡಿದ ಗತ್ತಿನಲ್ಲೇ 

ಬಚ್ಚಲ ಮನೆಯಿಂದ ಬೆತ್ತಲೆ ಓಡಿಬಂದು ಆರ್ಕಿಮಿಡೀಸಿನ ನಾಟಕ ಮಾಡುತ್ತಾ
ಕಚ್ಚೆ ಲಂಗೋಟಿ ಕೂಡ ಇಲ್ಲದೆ ಇವರ ಕಾಪಿಯ ಪಾಪಕರ್ಮದ ಬೆತ್ತಲು ಗೊತ್ತಾ?

ಸತ್ತು ಸ್ವರ್ಗಕ್ಕೋ, ನರಕಕ್ಕೋ ಹೋದಾಗ ಚಿತ್ರ ಗುಪ್ತರಿಗೂ ಬೊಕಳೆ ಕಲಾವಂತಿಕೆ
ಎತ್ತಿ ಇವರನ್ನು ಯಮ ದರ್ಮರಾಯ ಕುಡಿಯುವ ಎಣ್ಣೆಗೆ ಹಾಕಿದರೂ ನಿಜವಿಲ್ಲವೇಕೆ?

ಪಾಪಿಗಳು ಎಲ್ಲಾ ಬಣ್ಣದಲ್ಲೂ ಹುಟ್ಟುತ್ತಾರೆ: ಕಪ್ಪು, ಬಿಳುಪು, ಕಂದು, ಹಳದಿ, ಕೆಂಪು
ಕೋಪಿಸಿಕೊಂಡು ಅವರ ಮುಖದ ಮೇಲೆ ಉಗಿದರೆ, ರೆಡಿಯಾಗಿರುತ್ತೆ ಕಿಸೆಯಲ್ಲಿ ಕರ್ಚೀಪು  

ಯಾವಾಗಲಾದಾರೂ ನೀವು ಮಾಡಿದ್ದೀರೇನು ಕಾಪಿ? ನಿಜವೇನ್ರೀ ನೀವು ಸುಳ್ಳೇ ಹೇಳಲ್ವಾ?
ಯಾವತ್ತಾದರೂ ಅಪ್ಪಟ ಐಡಿಯಾ ಬಂದಿದೆಯೇನ್ರೀ ನಿಮ್ಮ ತಲೆಗೆ? ನೀವಂದಿದ್ದು ನಂಬಲಾ?