ಆದರದ ಕರೆ, ಬಲು ದೂರದ ಕರೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬಲು ದೂರದಲಿ
ಎತ್ತಲೋ ಇರುವ ತಾರೆಯನು
ಸುತ್ತುತಿರುವ ಪೃಥ್ವಿಯಂತದೆಯೇ
ಗುಂಡು ಗುಂಡಾಗಿ ಇದೆಯಂತೆ
ಅಲ್ಲಿಂದ ಸಂಕೇತದಲಿ ಕರೆಯುತಿಹರು
"ನಾವೂ, ನೀವೂ ಒಂದೇ ತರಹ"
"ನಾವೆಲ್ಲಾ ನಿಮ್ಮ ಗೊತ್ರದಲ್ಲಿಯೇ ಹುಟ್ಟಿ"
"ಸಂಕೆತಾಕ್ಷತೆ ಚುಮುಕಿಸುತಿಹೆವು"
"ಪನ್ನೀರ ದಾನಿ ಕಾದಿದೆ, ಗುಲಾಬಿ,
ಜಿಲೇಬಿ, ಲಾಡು, ಮೈಸೂರು ಪಾಕೂ
ನಿಮಗೆಂದೇ ಮಾಡಿಹೆವು"
"ಬರಬೇಕು, ಬರಲೇ ಬೇಕು ಬ್ರಾಹ್ಮಣರೆಲ್ಲಾ
ಸಂಸಾರ ಸಮೇತ, ಆತುರದಲಿ ಅತಿಥಿಗಳೆಲ್ಲ
ದಯ ಮಾಡಿಸ ಬೇಕು"
"ಗೊತ್ತಿರ ಬೇಕಲ್ಲವೇ ನಿಮಗೆಲ್ಲಾ
ನಾವು ಸಪ್ತರ್ಷಿ ಮಂಡಲದ ನಿಮ್ಮ ಪೂರ್ವಿಕರು"
No comments:
Post a Comment