Sunday, March 4, 2012

ಮಾಡಿದವರ ಪಾಪ ಆಡಿದವರ ಬಾಯಲ್ಲಿ!

ಮಾಡಿದವರ ಪಾಪ ಆಡಿದವರ ಬಾಯಲ್ಲಿ!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ


ಮಾಡಿದವರ ಪಾಪ ಆಡಿದವರ ಬಾಯಲ್ಲಿ! ಕಾಡಿದವರು ಬೇರೆ ಎಲ್ಲರೂ!
ಮಲಿನದ ಮನಸ್ಸಿನಲ್ಲಿ ಮಂಗಳ ಕಾರ್ಯ ಮಾಡಿದಂತಾಗಬಾರದು, ಅಷ್ಟೇ
ಆಡಿದವರಿಗೆ ಚಾಟಿ ಏಟು; ಮಾಡಿದವರಿಗೆ ಮತ್ತೆ, ಮತ್ತೆ ಮರ್ಯಾದೆಯೇ?
"ಕುಂಬಳ ಕಾಯಿ ಕಳ್ಳರು" ಎಂದರೆ ಹೆಗಲು ಮುಟ್ಟಿ ಕೊಂಡವರು ಸಭ್ಯರೇ?

ಸಭ್ಯತೆಯ ಶಾಲಿನಲ್ಲಿ ಮುಖ ಮುಚ್ಚಿ ಕೊಂಡರೆ ದುರ್ನಾತವು ಹರಡುವುದಿಲ್ಲವೇ?
ಪಾಪ ಮಾಡಿದವರಿಗೆ ಕೋಪದ ಮುಖವಾಡ; ಬಾಯಿಲ್ಲದವರು ಬಾಯಿ ಮುಚ್ಚುವುದೇಕೆ?

ರಾಹು ಕೇತುಗಳ ಬಂಧುಗಳು ಮನೆಗೆ ಬರುತ್ತಿದ್ದಾರೆಂದು ಗೊತ್ತಿದೆಯಲ್ಲವೇ?
ಅದಕ್ಕೆ ಮುಂಚೆಯೇ ಮಂತ್ರೋಚ್ಚಾಟನೆ ಮಾಡಿದರೆ ನಮಗೆ ಕ್ಷೇಮವಲ್ಲವೆ?

No comments:

Post a Comment