ಕವಿಗೆ ಕವನ ಸಂತಾನ ಮತ್ತೆ ಮತ್ತೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ತಲೆಯ ಮೂಲೆ, ಮೂಲೆಗಳಲಿ ಹಗಲೂ, ಇರುಳೂ ಆವರಿಸಿತ್ತು
ಬೆಳೆಯುತ್ತಾ ಅಬಲೆಯ ಅಂಡದಲಿ ಉಬ್ಬುವಂತೆ ಮಸ್ತಿಷ್ಕವಾಗಿತ್ತು
ಬಸುರಿಯು ತಿಂಗಳುಗಳು ಹೊತ್ತವಳು ಒಂಬತ್ತಕ್ಕೆ ಸುಸ್ತಾದಂತಾಗಿತ್ತು
ಹೊರುವುದು ಭಾರಿಯೇ ಭಾರವೇನೋ ಎಂಬಂತೆ ಹೆರುವಾತುರತೆಯಿತ್ತು
ಬರೆದೇ ತೀರಬೇಕು, ಭರದಲ್ಲಿ ಭಾರವನು ಬರಹದಲಿ ಇಳಿಸಿ ಬಿಡದಹೊರತು
ಕವಿಗೆ ಒಂದೇ? ಎರಡೇ? ಕವನ ಸಂತಾನ ನೂರು, ಸಾವಿರವೇ ಆದೀತು
ಕಾವ್ಯ ಸುಂದರಿಯು ಮತ್ತೆ, ಮತ್ತೆ ಬರುವಂತಹವಳಿಗೆ ತಂತಾನೇ ಮನಸೋತು
No comments:
Post a Comment