Sunday, July 29, 2012

ಕವಿಗೆ ಕವನ ಸಂತಾನ ಮತ್ತೆ ಮತ್ತೆ


ಕವಿಗೆ ಕವನ ಸಂತಾನ ಮತ್ತೆ ಮತ್ತೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಚಿತ್ತದಲಿ ಬಿತ್ತಿದ ಹೊಸತು ಒಂದು, ಮಿದುಳಿನಲ್ಲಿ ಮೊಳಕೆ ಬಿಟ್ಟಿತು
ತಲೆಯ ಮೂಲೆ, ಮೂಲೆಗಳಲಿ ಹಗಲೂ, ಇರುಳೂ ಆವರಿಸಿತ್ತು

ಬೆಳೆಯುತ್ತಾ ಅಬಲೆಯ ಅಂಡದಲಿ ಉಬ್ಬುವಂತೆ ಮಸ್ತಿಷ್ಕವಾಗಿತ್ತು
ಬಸುರಿಯು ತಿಂಗಳುಗಳು ಹೊತ್ತವಳು ಒಂಬತ್ತಕ್ಕೆ ಸುಸ್ತಾದಂತಾಗಿತ್ತು

ಹೊರುವುದು ಭಾರಿಯೇ ಭಾರವೇನೋ ಎಂಬಂತೆ ಹೆರುವಾತುರತೆಯಿತ್ತು
ಬರೆದೇ ತೀರಬೇಕು, ಭರದಲ್ಲಿ ಭಾರವನು ಬರಹದಲಿ ಇಳಿಸಿ ಬಿಡದಹೊರತು

ಕವಿಗೆ ಒಂದೇ? ಎರಡೇ? ಕವನ ಸಂತಾನ ನೂರು, ಸಾವಿರವೇ ಆದೀತು
ಕಾವ್ಯ ಸುಂದರಿಯು ಮತ್ತೆ, ಮತ್ತೆ ಬರುವಂತಹವಳಿಗೆ ತಂತಾನೇ ಮನಸೋತು

No comments:

Post a Comment