Monday, July 30, 2012

ನಾವು ಬೇರೆ; ನಮ್ಮ ಇರುವಿಕೆಯೇ ಬೇರೆ.


ನಾವು ಬೇರೆ; ನಮ್ಮ ಇರುವಿಕೆಯೇ ಬೇರೆ.
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹೊಸತು ಹೊಸೆಯುವ ಅತೀವ್ರ ಆಸೆ. ಇದು ನನ್ನ ವ್ರತ: ವ್ರತದ ಕಂಕಣ ಕೂಡ ಹೊಸದಿರಬೇಕು. ಹೊಸ ಕಂಕಣವನ್ನು ಉಷೆ ಮೂಡಿದಾಗ ಹೊಸಾದಾಗಿಯೇ ಹೊಸೆಯಬೇಕು. ಹೊಸ ಹೊಸ ಆಸೆ ಹೊತ್ತು, ಹೊತ್ತು ಬೆಳಗ ತಂದಾಗ, ಶ್ವಾಸದ ಪ್ರತಿ ಉಸುರಿಗೆ ಇಂದೇ ಅರಳಿದ ಕುಸುಮದ ಸುವಾಸನೆಯೇ ಬಡಿಯಬೇಕು. ದುಂಬಿಗಳ ಹಿಂಡು ರಭಸದಿ ಬರುವುದಕ್ಕೂ ತುಸು ಮುಂಚೆಯೇ ವನದ ಕುಸುಮಗಳೆಲ್ಲಾ ನನಗೇ ಕಾದಿರುತ್ತವೆ.

ಭೂತದ ಕಸದ ನಾತ ಎಸೆಯದೆಯೇ ಅದರ ಮಲವನ್ನೇ ವರುಷಗಳೆಲ್ಲಾ ಸೇವಿಸುವರ ಸಹವಾಸವೇ ಬೇಡ. ಅವರಿಗೆ ನಿನ್ನೆಯೂ, ಇಂದೂ, ನಾಳೆಯೂ ಒಂದೇ! ಹೊಸತಿಗೆ ಹಸಿವಿಲ್ಲ; ಹೊಸತರ ಘಾಸಿಯಂತೂ ಇಲ್ಲವೇ ಇಲ್ಲ; ಮೀಸೆ ನರೆತರೂ ಮಾಸಿದ ಮನಸು. 

ನನ್ನ, ನನ್ನಂತಹವರ ವರ್ಣವೆ ಬೇರೆ; ನಾವು, ನೀವೂ ಅಂತಹವರೇ ಅಹುದಲ್ಲವೇ? ಬೆಸ ಹೇಳಬೇಡಿ. ನಮಗೆ ವಿಶ್ರಾಂತಿ ಬೇಡ. ವಿಕ್ರಾಂತ ನಾಕ ನಮ್ಮ ನಾಡಿನ ಸಿರಿ ನಾಮ. 

No comments:

Post a Comment