ನಾನೊಬ್ಬನೇ ಮಹಾ ವ್ಯಾಸ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ವ್ಯಭಿಚಾರಿ ದ್ರೌಪದಿಯೂ, ಸುಂದರಿಯ ಕಾಮಿಸಿದವನೂ
ಜರೆಯುತ ಕೃಷ್ಣನನು ಓಲಗದಿ ಮೆರೆದ ಸುಯೋಧನನೂ
ಜರಾಸಂಧನನು ಸೀಳಿ ದಿಕ್ಕುಗಳಿಗೆಸೆದ ಬಲ ಭೀಮನೂ
ಉತ್ತರೆಗೆ ಹೆಣ್ಣು ವೇಷದಿ ಕುಣಿತವ ಕಲಿಸಿದ ಅರ್ಜುನನೂ
ಬತ್ತಳಿಕೆ, ಬಿಲ್ಲು ಬಾಣಗಳ ಬನ್ನೀ ಮರದ ಮೇಲೆ ಇಟ್ಟವನೂ
ಸುಂದರಿಯ ಸೀರೆಯ ಎಳೆಯುತ ಅಟ್ಟಹಾಸದಿ ನಕ್ಕವನೂ
ಮಂದ ಗಮನೆಯ ಮಾನವನು ಮಾಯದಲಿ ಉಳಿಸಿದವನೂ
ಮಹಾಭಾರತವೆಲ್ಲಾ ಹುಟ್ಟಿದುದು, ವಿಚಿತ್ರ ಪಾತ್ರಗಳ ಚಿತ್ರಣೆಯೂ
ಮೋಹ, ಮೋಸ, ಸಾಹಸ, ಸಕಲರ ಸಾವಿನಲಿ ಕೊನೆ ಗನಿಸಿದವನೂ
ನವಸರಂಗಳ ಕಾವ್ಯದ ಔತಣವ ನಿಮ್ಮಗೆಲ್ಲಾ ಬಡಿಸಿದವನೂ
ಸಾವಿರಾರು ಪಾತ್ರಗಳ ಕಲ್ಪಿಸಿದ ಓರ್ವನೇ ಮಹಾ ವ್ಯಾಸನೂ
ಅನೇಕ ಪಾತ್ರಧಾರಿ, ಏಕಮೇವ ಮಾಹಾ ಕವಿಯೂ, ಲೇಖಕನೂ
ಗಣೇಶನಿಗೆ ಲೇಖನಿಯ ಕೊಟ್ಟು ಬರೆಸಿದಂತೆ ನಿಜದಿ ಬರೆದವನೂ