Wednesday, February 29, 2012

ಎಂಜಲು ತಿಂದಿದ್ದೀರಾ?

ಎಂಜಲು ತಿಂದಿದ್ದೀರಾ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಎಂಜಲು ಬಹಳ ಸಿಹಿ, ಜೇನು ತಿಂದುಗಿದರೆ
ಮರಿ ಹಕ್ಕಿ ನೀನಾದರೆ, ಅಮ್ಮನ ಎಂಜಿಲೇ ಅಲ್ಲವೇ ರುಚಿಯೂಟ

ನಲ್ಲೆ, ನಲ್ಲರು ಕಾಮಾತುರರಾಗಿ ತಿನ್ನುವರು, ತಿನಿಸುವರು ಎಂಜಲು
ಸಲ್ಲದು, ಒಲ್ಲದು ಎನುವುದಿಲ್ಲ; ಎಲ್ಲವನೂ ರುಚಿಸುವರಯ್ಯಾ
ಕೇಳಿಯಾಟದಲಿ ಭರ ಭರದ ಗತಿಯಲ್ಲಿ ಇಂದ್ರನರಮನೆಯನೇ
ತಲುಪುವರು, ತೇಲುವರು, ತೆವಳುವರು ಒಬ್ಬರೊಬ್ಬರ ಮೇಲೆ

ಋಷಿಗಳು, ಯೋಗಿಗಳು, ಜ್ಞಾನಿ, ವಿಜ್ಞಾನಿಗಳ ಎಂಜಲು ಬಲು ರುಚಿ
ಕೃಷಿ ಎಲ್ಲಾ ಅವರದೇ; ಅವರು ಮನದಲ್ಲಿ, ಧ್ಯಾನದಲಿ ಜಗಿದು, ಮೆದ್ದು,
ಈಷ ವಿದ್ಯೆಯ ಉಗಿದು ರಚಿಸಿದ ಮಹಾಕಾವ್ಯಗಳ ಮೆಲುಕು ಹಾಕುವೆವು

ಗಾಥೆ, ಗಾದೆ, ಗಹನ ವಿಷಯಗಳು ಬಾಯಿಂದ ಬಾಯಿಗೆ ಎಂಜಲಿನಂತೆಯೇ
ಮಥಿಸಿ, ಮಥಿಸಿ, ಯಾರ ಎಂಜಲೋ ತಿಳಿಯದೆ ಅಂಜದೆ ನುಂಗುವೆವು

ಹೊಚ್ಚ ಹೊಸ ಎಂಜಲು ಹಸನಾಗಿ, ಹದವಾಗಿ ಹಂಚುವ ಹುಚ್ಚು ಎನಗಯ್ಯಾ
ಉಚ್ಚ ಎಂಜಲ ತುಂತುರು, ಕೆಲವೊಮ್ಮೆ ಜಡೀ ಮಳೆಯೇ ಅಹುದು ಎನದಯ್ಯಾ

ಡಾಕ್ಟರ್ ಮೂರ್ತಿ ಉವಾಚ: ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.


ಡಾಕ್ಟರ್ ಮೂರ್ತಿ ಉವಾಚ:

ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.
ಅವರವರಿಗೆ ಅರಿಯುವ ಸತ್ಯ ಅವರಿಗೆ ಮಾತ್ರ ವೇದ್ಯ.
ತಾವರಿತದ್ದು, ತಾವು ಹೆತ್ತದ್ದು, ತಾವು ಮುದ್ದಿಟ್ಟದ್ದು,
ತುಪ್ಪ, ಜೇನು ಇತ್ಯಾದಿಯ ಪಂಚಾಮೃತ!

Tuesday, February 28, 2012

ಹೊಟ್ಟೆಗೆ ಇಟ್ಟರೆ ಮಾತ್ರ ಸಾಹಿತ್ಯ ಗೋಷ್ಠಿ


ಹೊಟ್ಟೆಗೆ ಇಟ್ಟರೆ ಮಾತ್ರ ಸಾಹಿತ್ಯ ಗೋಷ್ಠಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅನ್ನಪೂರ್ಣೆಯು ರುಚಿ, ರುಚಿಯಾಗಿ ತಂದಾಗ ಮಾತ್ರ
ಕನ್ನಡದವರಿಗೆ ಸಾಹಿತ್ಯ ಗೋಷ್ಟಿಯ ಪುಷ್ಟಿ ಬರ್ತೀತ್ರೀ

ನಮ್ಮೆಲ್ಲರ ಗೋತ್ರ ಒಂದೇ; ತೀರ್ಥ, ಪ್ರಸಾದ ಇದ್ದಾಗ
ಹೆಮ್ಮೆಯೋ ಎಂಬಂತೆ ಅತೀ ಹುಮ್ಮಸ್ಸು, ತಿನ್ನುವಾಗ

ಯಾರೋ ಕಾದಂಬರಿಯನ್ನು ಓದಿ ಪುಟ್ಟ ಕತೆ ಹೇಳಿದರು
ಭರದಲ್ಲಿ ಮುಗಿಸುವ ಹೊತ್ತಿಗೆ, ವಿಮರ್ಶೆ ಮರತೇ ಬಿಟ್ಟರು

ಹುಟ್ಟೂರಿನಿಂದ ಬಂದ ಪಂಡಿತರಿಗೆಲ್ಲಾ ಒಂದೇ ಗಂಟೆ ಸಾಕೆ?
ಪೀಠಿಕೆಗೆ ಬೇಕಿನ್ನೊಂದು ಉಪ ಪೀಠಿಕೆ; ಇದಕ್ಕೆ ನಾವಿರ ಬೇಕೇಕೆ?

ಗಂಟೆ ಪೂರ್ತಿ ವಟ ಗುಟ್ಟಿದವರಿಗೆ ನಾವು ಬರೆದ ಪುಸ್ತಕ ಕಾಣಿಕೆ
ಪುಟ್ಟ ತೆಂಗಿನಕಾಯಿ, ಜೊತೆಗೆ ಮಾತ್ರ ಇಲ್ರೀ ವೀಳ್ಯದೆಲೆ ಅಡಿಕೆ

ತಿಂಡಿ, ತಿನಿಸು ಮಾಡುವರೊಬ್ಬರೇ! ತಿನ್ನಲಿಕ್ಕೆ ಐವತ್ತು ಹಾಜರು
ಚಂಡಿ ಹೆಂಡತಿ ಉಪವಾಸ ಹಾಕುತಾಳೆಂದು ಇರಬೇಕು ಬೇಜಾರು

ಗಂಡ ಮಾತ್ರ ಬರುವುದು, ಹೆಂಡತಿಗೆ ಸ್ವಲ್ಪ ಕನ್ನಡವೆಂದರೆ ಅಲರ್ಜೀ
ಗುಂಡ ಚಾಣಾಕ್ಷ!; ಹೆಂಡಿರಿಗೆ ಬೇಡಪ್ಪ ಅಡುಗೆ ಮಾಡಿ ತರುವ ಕಾಳಜಿ

ಅನ್ನ ಹಾಕಿದಳು ಹೆಸರಿಗೆ ತಕ್ಕಂತೆಯೇ ಅನ್ನಪೂರ್ಣೆ; ಎಂದೂ ನೆನೆಯಬೇಕು
ಕನ್ನಡದವರು ನಮಗೆಲ್ಲಾ ಇಂತಹ ನೆಪವಿದ್ದರೆ ಸಾಕು ಆಗ ಸಾಹಿತ್ಯ ಬೇಕು

ಚಳಿಯು ಮರುಕಳಿಸುತ್ತಿದೆ ನಿನ್ನದೇ ನೆನಪು


ಚಳಿಯು ಮರುಕಳಿಸುತ್ತಿದೆ ನಿನ್ನದೇ ನೆನಪು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಚಳಿಗಾಲದ ನಡುಕ ನಿನ್ನ ಆಲಿಂಗನದ ಬಿಸಿಯ ನೆನಪನ್ನು ಬೇಡುತ್ತದೆ
ಬಳಿ ಬಂದು ಕೆರಳಿಸು, ಹರಿಸು ಬಿಸಿ, ಬಿಸಿ, ರಕ್ತದ ಪ್ರವಾಹ ಹರಿವಂತೆ

ಮರೆತುಹೊದಂತೆ ಆಗ ಬಾರದು ಬಿಸಿಯುಸಿರು ಎನ್ನುಸಿರಲಿ ಬೆರೆಯಲಿ
ಹೊರತು ಆಗದಿರಲಿ ಸನಿಹದ ಸವಿಯೂಟ; ನಿತ್ಯ ಸಂತರ್ಪಣೆಯಾಗಲಿ

ಎನಗೂ ಚಳಿಯೇನು ಚೆಂದವಲ್ಲ; ನಿನಗೂ ನಡುಗುವ ಬಾಧಕ ಬೇಕೇಕೆ?
ಸನಿಹದ ಮಹಿಮೆಯಿಂದಾಗಲಿ; ಚಳಿಯಿದ್ದರೂ ಕಿಡಿ ಹೊತ್ತಿಸಲಿ ಅಗ್ಗಿಷ್ಟಿಕೆ

ಡಯಟ್ ಪ್ರಿಯರು ನಾವು


ಡಯಟ್ ಪ್ರಿಯರು ನಾವು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬಹಳಾ ಡಯಟ್ ಮಾಡ್ತಾರ್ರೀ ನಮ್ಮ ಕನ್ನಡದವರು
ಅನ್ನ ತಿನ್ನುವುದಿಲ್ಲ; ತಂಗಳಿನ ಮೇಲೆ ಪ್ರೀತಿ ಬಹಳ

ಸಕ್ಕರೆಯ ಬದಲು ಇನ್ನೇನೋ ಬಿಳಿಯ ಪುಡಿ ಕಾಫೀಗೆ
ಹಸುವಿನ ಹಾಲು ನಿಷೇಧವಾಗಿ, ಕರೀ ಕಾಫೀ ಬಾಯಿಗೆ

ಬೆಣ್ಣೆ, ತುಪ್ಪ ಎಂದರೇನು ಎನ್ನುವುದೇ ನೆನಪಿಲ್ಲ ಇವರಿಗೆ
ಎಣ್ಣೆಯೇ ಇಲ್ಲದ ಒಗ್ಗರಣೆ; ಕನ್ನಡದ ಅಡಿಗೆ ಮಾಡಿದರೆ!

ತಿಂಗಳಿಗೊಂದಲ್ಲ, ದಿನಾನೂ ಮೈಲಿಗೆ ಅಡುಗೆ ಮಾಡೆಂದರೆ
ಆಡಿನ ಜಾತಿಯವರಪ್ಪಾ ನಾವೆಲ್ಲಾ ಎಲೆ ಮಾತ್ರ ತಿನ್ನುವುದು 

ಅಮ್ಮನ ಚಾಳಿ ಮನೆ ಮಂದಿಗೆಲ್ಲಾ; ಮಕ್ಕಳಿಗೆ ಕನ್ನಡ ಅಲರ್ಜಿ!
ಅಪ್ಪನಿಗೆ ಎಲ್ಲಾ ಬಿದ್ದು ಹೋಗಿರಬೇಕು; ಹೆಣ್ ಪೆಕ್ದ್ ಅಂತಾರಲ್ಲ!

ದಯಟ್ಟಿಗೆ ಪರಿಮಿತಿಯೇ ಇಲ್ಲ; ಕನ್ನಡ ಸಾಹಿತ್ಯ ಕಿವಿಗೆ ಕಹಿ
ವರುಷಕ್ಕೆ ಒಂದು ಸಾರಿ ಓದಿದರೆ ಕನ್ನಡ ತಾಯಿಗೆ ಸಾಕೆ?

ಈಗ ಹೆಮ್ಮೆಯ ಕನ್ನಡಿಗನೆಂಬ ಬಿರುದು


ನನ್ನ ಅಪಾತ್ರ ದಾನದ ಪಟ್ಟಿ:

ನನ್ನ ದುಡ್ಡು ಯಡ್ಡಿಯದು
ನನ್ನ ಲಾಭ ಶೋಭಾಳಿಗೆ
ನನ್ನ ತೆರಿಗೆ ಕುಮಾರನಿಗೆ
ಲ್ಯಾಂಡು ಬೋಡ ಗೌಡನಿಗೆ

ನನ್ನ ಬೆಂಗಳೂರು ತಮಿಳರಿಗೆ, ತೆಲುಗರಿಗೆ, ಮಲೆಯಾಳಿಗಳಿಗೆ, ಮಾರವಾಡಿಗಳಿಗೆ ಎಳ್ಳು ನೀರು ತರ್ಪಣ ಕೊಟ್ಟುಬಿಟ್ಟೆ.

ಈಗ ಹೆಮ್ಮೆಯ ಕನ್ನಡಿಗನೆಂಬ ಬಿರುದು ಬಾವುಲಿಗಳನ್ನು ನಾನೇ ಬರೆದುಕೊಂಡೆ.

ದ್ಯಾವ್ರು ಯಾರು ಗೊತ್ತೇನ್ಲಾ ನಿಂಗೆ?


ದ್ಯಾವ್ರು ಯಾರು ಗೊತ್ತೇನ್ಲಾ ನಿಂಗೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ದ್ಯಾವ್ರೇ ನಮ್ಮನ್ನೆಲ್ಲಾ ಉಟ್ಟಿಸಿದ್ದು ಅಂತ ನಂಬ್ಕೆ ಐತೋ ಇಲ್ವೋ ನಿಂಗೆ?
ಅಸಿವಾದಾಗೆಲ್ಲಾ ಅಳಕ್ಕೆ ಮುಂಚೆನೇ ಊಟ ಕೊಟ್ಟದ್ದು ದ್ಯಾವ್ರಲ್ವಾ ನಮ್ಗೆ?

ತುಂಟತನ ಮಾಡ್ಕಂಡು, ಕಷ್ಟದಾಗೆ ಸಿಕ್ಕಿ ಹಾಕ್ಕಂಡು ಕಿರಿಚಿ ಆತ್ತಾಗೆಲ್ಲ
ಸೊಂಟದ ಮ್ಯಾಗೆ ಎತ್ಕಂಡು, ಹಾಗೆ ಯಾಕೆ ಮಾಡ್ದೆ ಮಗಾ ಅಂತೆಲ್ಲಾ

ಇನ್ನೊಂದು ಕಿತ ಅಂಗೆ ಮಾಡಬಾರದು ತಿಳೀತಾ ಪುಟ್ಟ ಅಂತ ತಬ್ಬಿದ್ದು
ಮತ್ತೊಂದು, ಮಗದೊಂದು ಅಂತ ತಪ್ಪಿನ ಮೇಲೆ ತಪ್ಪು ಮತ್ತೆ ಮಾಡಿದ್ದು

ನೆನಪೈತ ನಿನ್ ಮೊದ್ದು ತಲೆಗೆ? ಆ ದ್ಯಾವ್ರು ಬಗ್ಗೆ ನಿಂಗೆ ಏನಾರ ಗೊತ್ತೈತಾ?
ನಂಗೂ, ನಿಂಗೂ, ಅಟ್ಟಿಯ ಮನೆಗೆಲ್ಲಾ ಆ ದ್ಯಾವ್ರು ಹೆಣ್ಣೇ ಅಂತ ತಿಳಿದೈತಾ?