ನಾಲಿಗೆ ಮೇಲೆ ಕುಣಿಯುವ ಸೂಳೆಯಂತಹ ಸುಳ್ಳು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಸುಳ್ಳು ಅಮೃತಕ್ಕಿಂತ ಸಿಹಿ; ಸುಳ್ಳೇ ಸ್ನೇಹ ಬಂಧಿಸುವ ಸಾಧನ
ಅಳುಕದೆಯೇ ಸುಳ್ಳು ಕಜ್ಜಾಯ ಹಂಚುವುದನ್ನು ಕಲಿಯೋ ಮನ
ಕುರೂಪಿಗಳನ್ನೆಲ್ಲಾ ಸುರ ರೂಪಿಗಳೋ ಎಂಬಂತೆ ನಂಬಿಸುವಾ
ಭಾರತ ಯುಧ್ಧವನ್ನೇ ಗೆದ್ದು ಕೊಟ್ಟ ಶ್ರೀ ಕೃಷ್ಣನ ಸುಳ್ಳ ಪೂಜಿಸುವಾ
ನಂಬುವರಯ್ಯಾ ನಯವಾಗಿ ನೀವಿದ ಸುಳ್ಳು ತೈಲಾಂಜನವನ್ನೇ
ಉಂಬುವರಯ್ಯಾ ಪರವಾಗಿಲ್ಲ ಸಕ್ಕರೆ ಹೇರಿದ ವಿಷದ ಬಟ್ಟಲನ್ನೇ
ಊರು ಕೇರಿಗಳಲ್ಲಿ, ರಾಜನರಮನೆಯಲ್ಲಿ ನಿಜಕೆ ಮುಚ್ಚುವರು ಬಾಗಿಲು
ಹಾರುವರಾದರೂ, ಕುರುಬರಾದರೂ, ಸೂಳೆಯೂ, ವ್ಯಾಪಾರಿಗಳೂ
ದಿನಕ್ಕೊಂದೋ, ಎರಡು, ಮೂರೋ, ನೂರೋ ಎಲ್ಲಾ ಎಣಿಸುವರಾರು
ದೈನ್ಯದಲಿ ಇಷ್ಟ ದೇವರ ಬೇಡುವಾಗಲೇ ಬೊಕಳೆಯನ್ನು ಹೊಡೆಯುವರು