ಲಗಾಮಿಲ್ಲದ ಲಂಗೋಟಿ ರಾಜರು ಬೇಕೇಕೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಸಂಗಾತಿಯರು ಕಾಲು ಮೈಯೆಲ್ಲಾ ನೀಯುವುದೇಕೆ?
ಅಂಗೈಯೆಲ್ಲಾ ತುಪ್ಪ ಸುರಿಯುವಂತೆ ಭೋಜನ ಬೇಕೇ?
ಅಂಗನೆಯರ ಬಿಗಿದಪ್ಪಿಕೊಂಡು ಲಾಲಿ ಲೀಲೆಯದೇಕೆ?
ಸಿಂಗಾರದ ಚಿನ್ನ ವಜ್ರಗಳ ಕೀರೀಟ, ಅಂಬಾರಿ ಏರಬೇಕೆ?
ಡಂಗುರದ ಬಾಜಾ ಬಜಂತ್ರಿ, ಪರಾಕು ಹೊಗಳಿಕೆಯೇಕೆ?
ಮಂಗಳಾರತಿ, ಧೂಪದಾರತಿ, ಗಂಟೆ, ಜಾಗಟೆಗಳೆಲ್ಲವೇಕೆ?
ರಂಗು ರಂಗಿನ ಹೂಗಳನಿಟ್ಟು ಪಾದ ಪೂಜೆ ವೈಭವವೇಕೆ?
ಮಂಗಗಳಲ್ಲದೆ ಇನ್ನೇನು ಪೆಂಗ ಕುರುಡು ನಂಬಿಕೆಯೇಕೆ?
ದಂಗಾಗಿ ನಾವಿದೆಲ್ಲ ಆಟಗಳನು ನೋಡಿ ಸುಮ್ಮನಿರಬೇಕೆ?
No comments:
Post a Comment