ಎಲ್ಲ ಪೂಜೆಗಿಂತ ಅತಿ ಮುಖ್ಯ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಆಲಸ ಬೇಡ, ಬೇಸರ ಬೇಡ; ಸಲೀಸಾಗಿ ಅಲೆದು ಮೆರೆವುದಾದರೂ
ಆಸೆ ತುಸೂ ಬೆಸವಾಗದ ಹಾಗೆ ನಲಿದಾಡು ಮಾನವ ತುಂಬಿದೆದೆಯಲಿ
ನಶಿಸಿ ಹೋಗುವ ಕಾಲವೆಲ್ಲ ಕಳೆದ ಮೇಲೆ ಉಳಿವುದಿಲ್ಲ; ಮನದಟ್ಟಾಗಲಿ
ಇರುವುದು ಐದೇ ಅಲ್ಲವೇನೋ ಇಂದ್ರಿಯಗಳು; ಹಸಿವಿದ್ದಾಗ ಮೆರೆದಾಡೋ
ಇರುವುದಿಲ್ಲ ಉಬ್ಬಳಿಸುವಾಸೆಗಳು ಮುಪ್ಪಿಗೆ ಮುಂಚೆಯೇ ಕುಣಿದಾಡೋ
ಜೊಲ್ಲು ಸುರಿಸಿದ ಎಲ್ಲ ಭೋಗಗಳಲಿ ಭಾಗಿಯಾಗಿ ಬಿಡುವುದು ಶಿವನ ಸೇವೆ
ಇಲ್ಲ, ಮತ್ತೇನಿಲ್ಲ ಈ ಜನುಮದಲಿ; ಎಲ್ಲ ಪೂಜೆಗಿಂತ ಮುಖ್ಯವೋ ದೇಹ ಸೇವೆ
No comments:
Post a Comment